Saturday, June 12, 2021

ಶ್ರೀ ಸಾಲೂರು ಬೃಹನ್ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳಿಗೆ ನನ್ನ ನಮನಗಳು


               ಭಾರತವಾಣಿ ಬಹುಭಾಷಾ ಆನ್‌ಲೈನ್‌ ಜ್ಞಾನಕೋಶದಲ್ಲಿ (www.bharatavani.in) ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಜ್ಞಾನ ಸಂಗ್ರಹದಲ್ಲಿ ತೊಡಗಿದ್ದು ಮತ್ತು ಜ್ಞಾನಾಸಕ್ತ ಸನ್ಯಾಸಿ ಶ್ರೀ ಎಂ ನಾಗೇಂದ್ರ ಅವರು ಶ್ರೀ ಮಲೆ ಮಹದೇಶ್ವರಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಉತ್ತರಾಧಿಕಾರಿಯಾಗಿ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ ಎಂಬ ಮೂಲ ಗುರುಗಳ ನಾಮಧೇಯದಿಂದ (8 ಆಗಸ್ಟ್‌ 2020) ವಿಧಿವಿಧಾನಯುಕ್ತ ಕಾರ್ಯಕ್ರಮದಲ್ಲಿ ವಿಧ್ಯುಕ್ತವಾಗಿ ನಿಯುಕ್ತಿಗೊಂಡಿರುವುದನ್ನು ನಾನು ಅತ್ಯಂತ ಅಭಿಮಾನದಿಂದ ಪ್ರಕಟಿಸುತ್ತಿದ್ದೇನೆ. 


ಸ್ವಾಮಿ ಪರಂಪರೆಯಲ್ಲಿ ಅಲ್ಲಲ್ಲಿ ನಶಿಸುತ್ತಿರುವ ಧ್ಯೇಯನಿಷ್ಠೆಯನ್ನು ಗಮನಿಸಿದಾಗ ಶ್ರೀಗಳಂತಹ ಯುವಕರು ದೃಢಹೆಜ್ಜೆ ಇಟ್ಟು ಮಠದ ಉತ್ತರಾಧಿಕಾರಿ ಆಗಿರುವುದು ತುಂಬಾ ಉತ್ತಮ ಬೆಳವಣಿಗೆ. 

ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ, ತಮ್ಮ ಅನುಭವದಲ್ಲಿ, ಹೊಸ ಹೊಣೆಗಾರಿಕೆಯಲ್ಲಿ ಶ್ರೀ ಮಠವು ಉತ್ತರೋತ್ತರ ಪ್ರಗತಿ ಸಾಧಿಸಲಿ. ಯಾವತ್ತೂ ಈ ಸಮಾಜವು ಶ್ರೀ ಮಠದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಜನಹಿತದ ನೂರಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ದೇವಕೃಪೆಗೆ ಪಾತ್ರರಾಗಿ ಎಂದು ಅತ್ಯಂತ ಅಭಿಮಾನ ಮತ್ತು ನಿರೀಕ್ಷೆಗಳಿಂದ ಶುಭ ಹಾರೈಸುತ್ತೇನೆ.






                   ಶ್ರೀ ಸಾಲೂರು ಬೃಹನ್ಮಠದ ಉತ್ತರಾಧಿಕಾರಿಗಳಾಗಿ ನಿಯುಕ್ತಿಗೊಂಡಿರುವ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ (ಪೂರ್ವಾಶ್ರದ ಹೆಸರು: ಎಂ. ನಾಗೇಂದ್ರ) ಅವರ ಸಂಕ್ಷಿಪ್ತ ಪರಿಚಯ.


ಶ್ರೀಗಳು ಅವರು ದಿ. 04.06.1989 ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಜನಿಸಿದರು. ಅವರು ಪ್ರಾಥಮಿಕ ಸಂಸ್ಕೃತ ವೇದ ಶಿಕ್ಷಣವನ್ನು ಶ್ರೀ ಸಿದ್ದಗಂಗಾ ಮಠದಲ್ಲಿ ಮತ್ತು ಆಗಮ ಮತ್ತು ಮಾಧ್ಯಮಿಕ ಸಂಸ್ಕೃತ ಶಿಕ್ಷಣವನ್ನು ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಾಡಿದ್ದಾರೆ. ಮೈಸೂರು ವಿ.ವಿ.ಯಲ್ಲಿ ಸಂಸ್ಕೃತ ಎಂ.ಎ ಪದವಿಯನ್ನು ಹಲವು ಚಿನ್ನದ ಪದಕಗಳು ಮತ್ತು ನಗದು ಬಹುಮಾನಗಳೊಂದಿಗೆ ಪೂರೈಸಿದ್ದಾರೆ. ಅಲ್ಲದೆ ವೇದಾಂತದಲ್ಲಿ ಸಂಸ್ಕೃತ ವಿದ್ವ ತ್ ಪದವಿಯನ್ನು ಗಳಿಸಿದ್ದಾರೆ. ನಾಡಿನ ಖ್ಯಾತ ವಿದ್ವಾಂಸ ಮಠಾಧಿಪತಿಗಳೆನಿಸಿದ ಡಾ. ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳ ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ಮೈಸೂರಿನ ಶ್ರೀಕುಂದೂರು ಮಠದಲ್ಲಿದ್ದುಕೊಂಡು ಅಧ್ಯಯನ ಮಾಡಿದರು. 


ಪ್ರಸ್ತುತ ಆ ಮಠದ ಅಧ್ಯಕ್ಷರು ಮತ್ತು ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಶ್ರೀ ಶರತ್ ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಸ್ಕೃತ ವಿವಿಯಲ್ಲಿ ಎಂ.ಫಿಲ್ ಪದವಿಯನ್ನು ಪಡೆದಿರುವ ನಾಗೇಂದ್ರ ಅವರು ಪ್ರಸ್ತುತ ಅಲ್ಲಿಯೇ ಪಿಎಚ್ ಡಿ ಪದವಿಗಾಗಿ ಶೈವಾಗಮಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅವರು ಗುಜರಾತ್, ಹಿಮಾಚಲ ಪ್ರದೇಶ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮತ್ತು ವಿಶ್ವಮಟ್ಟದಲ್ಲಿ ನೇಪಾಳ ಮತ್ತು ಮಲೇಷ್ಯಾ ದೇಶಗಳಲ್ಲಿ ನಡೆದಿರುವ ವಿಚಾರಸಂಕಿರಣಗಳಲ್ಲಿ ಭಾಷಾಶಾಸ್ತ್ರ ಧರ್ಮ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಸುಮಾರು 10ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ ಪುರಾಣ ಲಿಪಿಶಾಸ್ತ್ರ ಮತ್ತು ಹಸ್ತ ಪ್ರತಿಗಳ ಮೇಲೆ ವಿಶೇಷ ಅಧ್ಯಯನದಲ್ಲಿ ನಿರತರಾಗಿದ್ದಾರೆ 


2015ರಲ್ಲಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಆಯುರ್ವೇದ ಆಹಾರ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಹಸ್ತಪ್ರತಿಶಾಸ್ತ್ರ ಸಂಶೋಧಕರಾಗಿ ಕಾರ್ಯನಿರ್ವಹಿಸಿ, 2016 ರಿಂದ ಪ್ರಸ್ತುತ ರವರೆಗೆ ಮೈಸೂರಿನ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಭಾರತೀಯ ಭಾಷಾ ಸಂಸ್ಥಾನ (CIIL}ದ ಭಾರತವಾಣಿ ಯೋಜನೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ವಿದ್ವತ್ತು ದಕ್ಷತೆ ಮತ್ತು ಆಧ್ಯಾತ್ಮಿಕ ಮಾರ್ಗವನ್ನು ಪರಿಗಣಿಸಿ ಸಾಲೂರು ಮಠದ ಪೀಠಾಧಿಪತಿಗಳಾದ ಶ್ರೀ ಪಟ್ಟದ ಗುರು ಸ್ವಾಮಿಗಳವರು, ಪರಮಪೂಜ್ಯ ಶ್ರೀ ಸಂತರು ಜಗದ್ಗುರುಗಳವರು, ಪರಮ ಪೂಜ್ಯ ಸಿದ್ದಗಂಗಾ ಶ್ರೀಗಳವರು, ಪರಮಪೂಜ್ಯ ದೇಗುಲ ಮಠದ ಶ್ರೀಗಳವರ ಮತ್ತು ನಾಡಿನ ಮಠಾಧೀಶರ ಆಶೀರ್ವಾದಗಳೊಂದಿಗೆ ಅವರನ್ನು ಶ್ರೀಮಠಕ್ಕೆ ನೂತನ ಪೀಠಾಧಿಪತಿಗಳನ್ನಾಗಿ ಸ್ವೀಕರಿಸಿದ್ದಾರೆ.

1 comment:

ಹೌದು ಬದುಕೇ- ಬವಣೆ ನಿನಗಾಗಿ

 ಉದರ ನಿಮಿತ್ತಮ್ ಬಹುಕೃತ ವೇಷಮ್ ಎಂಬಂತೆ *ತುತ್ತಿನ ಚೀಲ ತುಂಬಿಸಿಕೊಳ್ಳಲು ಮನುಷ್ಯ ವಿಧ ವಿಧ ವೇಷಗಳನ್ನು ಹಾಕಿ ಕಷ್ಟಪಡುತ್ತಿದ್ದಾನೆ.*     ಇದು ಒಂದು ದಿನದ ಮಾತಲ್ಲ ಪ್...